ಬೆಳಗಿನ ಉಪಾಹಾರ ಬಿಡುವ ಮುನ್ನ ಇರಲಿ ಎಚ್ಚರ! ಅಧ್ಯಯನದಲ್ಲಿ ಹೊರಗೆ ಬಿತ್ತು ಶಾಕಿಂಗ್ ಸುದ್ದಿ
ಬೆಳಗಿನ ಉಪಾಹಾರ ಬಿಡುವ ಮುನ್ನ ಇರಲಿ ಎಚ್ಚರ! ಅಧ್ಯಯನದಲ್ಲಿ ಹೊರಗೆ ಬಿತ್ತು ಶಾಕಿಂಗ್ ಸುದ್ದಿ
ಬೆಳಗಿನ ತಿಂಡಿ ಸೇವಿಸದಿದ್ದರೆ ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು ಅಂತ ಅಧ್ಯಯನವೊಂದರಲ್ಲಿ ತಿಳಿದಿದೆ. ಬುದ್ಧಿಮಾಂದ್ಯತೆಯಿಂದ ಮೆದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ. ದಿನಗಳು ಕಳೆದಂತೆ ಆಲೋಚನಾ ಶಕ್ತಿ, ನೆನಪಿನ ಶಕ್ತಿ ಕೂಡಾ ಕಡಿಮೆಯಾಗುತ್ತದೆ.

ಬ್ಯುಸಿ ಲೈಫಲ್ಲಿ ಸರಿಯಾಗಿ ಉಪಹಾರ (Breakfast) ಸೇವಿಸಲ್ಲ. ಕೆಲವರು ಆಫೀಸಿಗೆ, ಶಾಲೆ- ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲಿ ಬೆಳಿಗ್ಗೆ ಬ್ರೇಕ್ ಫಾಸ್ಟ್ ಮಾಡಲ್ಲ. ಇನ್ನು ಕೆಲವರು ದೇಹದ ತೂಕ ಇಳಿಸಲು ಉಪಹಾರ ತಿನ್ನಲ್ಲ. ಇದು ಒಳ್ಳೆಯ ಜೀವನ ಶೈಲಿಯಲ್ಲ. ಬೆಳಿಗ್ಗೆ ಉಪಹಾರ ಸೇವಿಸಿದರೆ ಬೇರೆ ಸಮಸ್ಯೆಗಳ ಹುಟ್ಟುವಿಕೆಗೆ ಕಾರಣವಾಗುತ್ತದೆ. ಅಧ್ಯಯನವೊಂದರಲ್ಲಿ ಬೆಳಗಿನ ಉಪಾಹಾರವನ್ನು ಬಿಡುವುದರಿಂದ ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ. ಬೆಳಗಿನ ಉಪಾಹಾರ ದಿನದ ಪ್ರಮುಖ ಊಟ ಇದ್ದಂತೆ. ಹೀಗಂತೆ ನಿಮ್ಮ ಮನೆಯಲ್ಲಿ ಹೇಳುತ್ತಿರುತ್ತಾರೆ. ಆದರೆ ಅವರ ಮಾತಿಗೆ ತಲೆಕೆಡಿಸಿಕೊಳ್ಳದೆ ಉಪಹಾರ ಸೇವಿಸದೇ ಇರುವವರು ಹಲವಾರು ಜನ ಇದ್ದಾರೆ. ಹೀಗೆ ಮಾಡುವುದು ತಪ್ಪು. ಉತ್ತಮ ಆರೋಗ್ಯಕ್ಕೆ ಬೆಳಗಿನ ಟಿಫಿನ್ ಅನಿವಾರ್ಯ.
Comments
Post a Comment